ಚೈತನ್ಯ ಚಿಮ್ಮಿದಾಗ

ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ
ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ
ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ
ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧||

ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ
ತುಂಬ್ಕೊಂಡೆ ಬಂದಿತ್ತು ಯಾವ್ದೋ ಶಕ್ತಿ
ಬರಡಾದ ಭೂಮಿಗೆ ಸ್ವರ್ಗಾನೆ ಇಳಿದಿತ್ತು
ಮಂತ್ರ ಹಾಕಿದಂತೆ ಯಾವ್ದೋ ಯುಕ್ತಿ ||೨ ||

ಮರುಭೂಮ್ಯಾಗೆ ಚಿಲುಮೆದ್ದು ಚಿಮ್ದಂಗೆ ಮ್ಯಾಲಕ್ಕೆ
ಎಲ್ಲಿತ್ತೊ ಒಳಸೆಲೆ ಕಾಣ್ಲೆ ಇಲ್ಲ
ಒಣಗಿದ್ದ ಮರದಾಗೆ ಒಮ್ಮಿಂದೊಮ್ಗೆ ಹಸಿರು
ಉಸಿರಾಡಿ ಉಡಿಯಾಗೆ ತುಂಬಿತಲ್ಲ ||೩||

ಆಲಸ್ಯ ಅಡಗ್ಹೋತು ಭಯವೆಲ್ಲ ಕಡೆಗಾಯ್ತು
ಕೋಪ ತಾಪವೆಲ್ಲ ತಣ್ಣಗಾಯ್ತು
ನಿದ್ದೆಲ್ಲ ಎಚ್ರಾತು ಎಚ್ರಾನೆ ಮುದ್ದಾಯ್ತು
ಕಲ್ಲಾಗೆ ಕಣ್ಣೀರು ಬಂದಂಗಾಯ್ತು ||೪||

ಒಬ್ಬನೆ ಇದ್ದವಗೆ ನೂರ್ ಜನ ಬಲಬಂತು
ನಾನೊಬ್ನೆ ಅಲ್ಲಂತ ಧೈರ್ಯ ಬಂತು
ರಾತ್ರೆಲ್ಲ ಬೆಳಕಾತು ಹಗಲೆಲ್ಲ ಬಯಲಾತು
ಹುಚ್ಚೆದ್ದು ಕುಣಿವಂಥ ಸ್ಫೂರ್ತಿ ಬಂತು ||೫||

ನೆಲದಲ್ಲಿ ನಿಂತವ್ಗೆ ಗಗನದ್ಹೂ ಸಿಕ್ಕಿತ್ತು
ಆಳಕ್ಕೆ ಬೇರುಗಳು ಹಬ್ಬಿದ್ದವು
ಒಳಗೆಲ್ಲಾ ಬೆಳೆದಂತೆ ಕೊಂಬೆಗಳು ಬೆಳೆದಿದ್ದು
ವಿಶ್ವಾನೆ ಹಬ್ಬಿದಂತೆ ಚಾಚಿದ್ದವು ||೬||

ಕಷ್ಟಗಳ ಗುಡ್ಡಗಳು ಬಿಳಿ ಮೋಡಗಳಾದವು
ಚಿಂತೆಲ್ಲ ಸಂತೆಲ್ಲ ಬಯಲಾಯಿತು
ದುಃಖಾದ ನೀರಲ್ಲು ಸುಖ ತುಂಬಿ ಕಣ್ಣೀರು
ಸಂಕಟದ ನೋವೆಲ್ಲ ಸಯವಾಯಿತು ||೭||

ನಂಗೊತ್ತು ಈ ಸೊಗಸು ಒಂದೇ ಕ್ಷಣಂಬೋದು
ಜೀವಾ ಹಿಡಿಯಾಕೊಂದೆ ಬೊಗಸೆ ಸಾಕು
ವಿಷಯ ಸಾಗರದಾಗ ಈಜಾಡ್ತಾ ಸಾಗಿದ್ರು
ಒಂದೆ ಹನಿ ಅಮೃತಾವು ಸಾಕೆ ಸಾಕು ||೮||

ಭೂಮಿ ಸೀಮೀ ಬಿಟ್ಟು ಬರಿ ಬಾನು ಬೇಕಿಲ್ಲ
ಬಾನ್ನ್ಯಾಗೆ ಸ್ವರ್ಗಾನೆ ಇರವೊಲ್ದ್ಯಾಕೆ
ಆಕಾಶ್ದಾಗ ಹಾರ್ವಂಥ ಹಕ್ಕೀನೆ ಆಗ್ಬೇಕೆ
ಮಣ್ಣಾಗಿನ ಮಣಿಯಾಗಿ ಇರಬಾರ್ದ್ಯೇಕೆ ||೯||
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವತಾವಾದಿ ಡಾ||ಅಂಬೇಡ್ಕರ್
Next post ಜನಸೇವೆ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys